ಪಣಜಿಯಿಂದ ಬೆಳಿಗ್ಗೆ ಹೊರಟು ಕಾರವಾರಕ್ಕೆ ಸಂಜೆ ತಲುಪಿದ ಅವರನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ಹಾರ ಹಾಕಿ ಅಭಿನಂದಿಸಿದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ಇಲಾಖೆಯ ತರಬೇತುದಾರ ಪ್ರಕಾಶ ರೇವಣಕರ್, ಹಿರಿಯ ಜಲಸಾಹಸ ಕ್ರೀಡಾ ಪ್ರಶಿಕ್ಷಕ ಪ್ರಕಾಶ ಹರಿಕಂತ್ರ, ಶಿಲಾರೋಹಣ ತರಬೇತುದಾರ ಮುನಿರಾಜು, ಜಿಲ್ಲಾ ಅಥ್ಲೆಟಿಕ್ ಸಂಘದ ಕಾರ್ಯದರ್ಶಿ ಕೆ.ಆರ್ ನಾಯಕ, ಸದಾನಂದ ನಾಯ್ಕ ಇದ್ದರು.