ಶಿರಸಿ: ಸಾಮಾಜಿಕ ಕಾರ್ಯಕರ್ತರಾಗಿದ್ದ ದೀಪಕ ಹೊನ್ನಾವರ ಸ್ಮರಣಾರ್ಥ ಅವರ ಸಹೋದರಿ ಸುಷ್ಮಾ ರಾಜಗೋಪಾಲ ನಗರದ ವಿವಿಧೆಡೆ ಬುಧವಾರ ದಿನಸಿ ಕಿಟ್ ವಿತರಿಸಿದರು.
ಇಲ್ಲಿನ ಬಿಡ್ಕಿಬೈಲ್ನಲ್ಲಿ ಕೂಲಿಕಾರ್ಮಿಕರಿಗೆ, ಅಗತ್ಯವಿದ್ದವರಿಗೆ ದಿನಸಿ ಕಿಟ್ ನೀಡಲಾಯಿತು. ಬಳಿಕ ಎಂ.ಇ.ಎಸ್. ನರ್ಸಿಂಗ್ ಕಾಲೇಜ್ಗೆ ತೆರಳಿ ಅಲ್ಲಿನ ಬಡ ವಿದ್ಯಾರ್ಥಿಗಳಿಗೆ ಕಿಟ್ ಹಂಚಿಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸುಷ್ಮಾ ರಾಜಗೋಪಾಲ್, ‘ಬಡವರ ಧ್ವನಿಯಾಗಿ ಕೆಲಸ ಮಾಡಬೇಕಾಗಿದೆ. ಮಾನವೀಯ ಗುಣಗಳಿಗೆ ಆದ್ಯತೆ ನೀಡಬೇಕು’ ಎಂದರು.