ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ‘ಸಾರಿಗೆ ಸಂಸ್ಥೆ ಬಡವರು, ಮಧ್ಯಮ ವರ್ಗದವರ ಸಂಸ್ಥೆಯಾಗಿದೆ. ಜನರೇ ಸಾರಿಗೆ ಸಂಸ್ಥೆಯನ್ನು ಮೇಲಕ್ಕೆತ್ತಬೇಕು’ ಎಂದರು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ಸಾರಿಗೆ ಇಲಾಖೆ ಅಪರ ಆಯುಕ್ತ ಮಾರುತಿ ಸಾಮ್ರಾಣಿ, ಜಂಟಿ ಆಯುಕ್ತೆ ಜಿ.ಶೋಭಾ, ಆರ್.ಟಿ.ಒ. ಸಿ.ಡಿ.ನಾಯ್ಕ, ಇತರರು ಇದ್ದರು. ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ರಾಜಕುಮಾರ್ ಸ್ವಾಗತಿಸಿದರು.