'ಮೃತಪಟ್ಟಿರುವ ಬೌದ್ಧ ಗುರು ಯಶಿ ಅವರು, ವಾರಾಣಸಿಯಲ್ಲಿ 20ಕ್ಕೂ ಹೆಚ್ಚು ವರ್ಷ ಬೌದ್ಧತತ್ವದ ಬೋಧನೆ ಮಾಡಿದ್ದಾರೆ. ಇಲ್ಲಿನ ಬೌದ್ಧ ಮಂದಿರದಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಿದ್ದಾರೆ. ಧ್ಯಾನ ಮಾಡುತ್ತಲೇ, ಪ್ರಾಣ ತ್ಯಾಗ ಮಾಡಿದ್ದರು. ಆದರೆ, ಅವರ ಆತ್ಮ ಇನ್ನೂ ಜೀವಂತ ಇದ್ದಿದ್ದರಿಂದ, ಇಲ್ಲಿಯವರೆಗೂ ಕೋಣೆಯಲ್ಲಿ ಮಂಚದಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಇದ್ದ ಮೃತದೇಹದ ಮುಂದೆ ದೀಪ ಬೆಳಗಿಸಿ, ಪ್ರಾರ್ಥಿಸಲಾಗುತ್ತಿತ್ತು' ಎಂದರು.