ಅಂಕೋಲಾ: ತಾಲ್ಲೂಕಿನಮಾಸ್ತಿಕಟ್ಟಾ ಸಮೀಪ ಮಂಗಳವಾರ ಸಂಜೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸ್ವಲ್ಪ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿತ್ತು. ಇದರಿಂದ ಸ್ಥಳದಲ್ಲಿಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ.
ಅಂಕೋಲಾದಿಂದ ಯಲ್ಲಾಪುರದತ್ತ ಸಂಚರಿಸುತ್ತಿದ್ದ ಟ್ಯಾಂಕರ್ ಹಿಂದೂಸ್ತಾನ್ ಪೆಟ್ರೋಲಿಯಂಸಂಸ್ಥೆಗೆ ಸೇರಿದ್ದಾಗಿದೆ.ಚಾಲಕನ ನಿಯಂತ್ರಣಕ್ಕೆಸಿಗದೇಹೆದ್ದಾರಿಯಬದಿಯಲ್ಲಿಉರುಳಿಬಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ, ಅದರಿಂದ ಹೆಚ್ಚಿನ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗದಂತೆ ತಡೆದರು.
ಮುನ್ನೆಚ್ಚರಿಕೆ ಕ್ರಮವಾಗಿ ಸ್ವಲ್ಪಹೊತ್ತುವಾಹನ ಸಂಚಾರವನ್ನು ಹೆಬ್ಬುಳ ಮಾರ್ಗವಾಗಿಬದಲಾಯಿಸಲಾಗಿತ್ತು. ಅನಿಲ ಸೋರಿಕೆಯನ್ನು ಸಂಪೂರ್ಣವಾಗಿ ತಡೆದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಸಿಪಿಐ ಪ್ರಮೋದ ಕುಮಾರ, ಪಿಎಸ್ಐ ಪುಟ್ಟೇಗೌಡ, ಪ್ರೊಬೆಷನರಿ ಪಿಎಸ್ಐ ಸಿದ್ದು, ಅನಿಲ್, ಮಂಜು ಕಾರ್ಯಾಚರಣೆಯಲ್ಲಿಪಾಲ್ಗೊಂಡರು.