ಇವೆರಡೂ ಸಂಘಟನೆಗಳ ವಕ್ತಾರಾಗಿರುವ ಸುಶೀಲ್ಕುಮಾರ್ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕನ್ನಡಿಗನಿಗೆ ದುಡಿಮೆ ಕೊಡಿಸುವುದು ನಮ್ಮ ಸಂಘಟನೆಗಳ ಏಕೈಕ ಗುರಿಯಾಗಿದೆ. ಈಗಾಗಲೇ ಹೊರ ರಾಜ್ಯದವರನ್ನು ಬ್ಯಾಂಕ್ ಗಳಲ್ಲಿ ನೇಮಕ ಮಾಡುತ್ತಿರುವುದನ್ನು ವಿರೋಧಿಸಿ ಟ್ವಿಟರ್ನಲ್ಲಿ ಅಭಿಯಾನ, ಪ್ರಧಾನಿ, ಮುಖ್ಯಮಂತ್ರಿ, ಆರ್ಬಿಐಗೆ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿಯಿಂದ ಉತ್ತರ ಬಂದಿದ್ದರೂ, ಅದರಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ ನಾವೇ ಎಲ್ಲ ಬ್ಯಾಂಕ್ಗಳಿಗೆ ಭೇಟಿ ನೀಡಿ, ಕನ್ನಡಿಗರಿಗೆ ಪ್ರಾಮುಖ್ಯತೆ ನೀಡುವಂತೆ ಹೇಳುತ್ತಿದ್ದೇವೆ’ ಎಂದರು.