ರಾತ್ರಿ 2ರ ಸುಮಾರಿಗೆ ತನಿಖಾ ಠಾಣೆ ಬಳಿಗೆ ಗೋವಾ ಕಡೆಯಿಂದ ಬಂದ ಲಾರಿಯನ್ನು ಪೊಲೀಸರು ಪರಿಶೀಲನೆ ಮಾಡಿದರು. ಆಗ ಸ್ಯಾನಿಟರಿ ಪ್ಯಾಡ್ಗಳ ಪೊಟ್ಟಣಗಳ ಹಿಂದೆ ಮದ್ಯದ ಬಾಟಲಿಗಳು ಕಂಡುಬಂದವು. ಈ ಸಂಬಂಧ ಲಾರಿ ಚಾಲಕ, ತಮಿಳುನಾಡುಕೊಯಮತ್ತೂರಿನ ಸುಂದರರಾಜ್ ರಾಮಸ್ವಾಮಿ (45) ಎಂಬಾತನನ್ನು ಬಂಧಿಸಲಾಗಿದೆ.
ವಶಪಡಿಸಿಕೊಂಡ ಮದ್ಯವು ಸುಮಾರು ₹ 43 ಸಾವಿರದ್ದಾಗಿದೆ. ಲಾರಿಯು ಅಂದಾಜು ₹ 18 ಲಕ್ಷಮೌಲ್ಯದ್ದು ಹಾಗೂ ಸ್ಯಾನಿಟರಿ ಪ್ಯಾಡ್ಗಳು ₹ 11.50 ಲಕ್ಷ ಮೊತ್ತದಾಗಿವೆ. ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ₹ 29.93 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಂದರ್ಭದಲ್ಲಿ ಅಬಕಾರಿ ಇನ್ಸ್ಪೆಕ್ಟರ್ ರೇಷ್ಮಾ ಬಾನಾವಳಿಕರ್, ಅಬಕಾರಿ ರಕ್ಷಕರಾದ ಎಂ.ಕೆ.ಮೊಗೇರ, ಸದಾಶಿವ ರಾಠೋಡ, ಉಳ್ಳಪ್ಪ ತಳಸೆ, ಟಿ.ಬಿ.ಗೊಂಡ ಹಾಗೂ ದೀಪಕ್ ಬಾರಾಮತಿ ಇದ್ದರು.