ಗೋಕರ್ಣ: ಪಶ್ಚಿಮ ಕರಾವಳಿಯಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಬೀಸಿದ ರಭಸದ ಗಾಳಿಗೆ ಗೋಕರ್ಣದಲ್ಲಿ ಹಲವು ಮರಗಳು ಧರೆಗೆ ಉರುಳಿದ್ದು ನಾಗಬೀದಿಯಲ್ಲಿರುವ ನಾಗೇಶ್ವರ ದೇವಸ್ಥಾನದ ಮೇಲೆ ಒಂದು ಮಾವಿನ ಮರ, ಮೂರು ತೆಂಗಿನ ಮರ ಹಾಗೂ ಒಂದು ಅಡಿಕೆ ಮರ ಬಿದ್ದಿದ್ದು ಒಂದು ಭಾಗ ಭಾಗಶಃ ಹಾನಿಯಾಗಿದೆ.
ಅದೇ ರೀತಿ ಸಮುದ್ರ ತೀರದಿಂದ ಮುಖ್ಯ ರಸ್ತೆಗೆ ಹೋಗುವ ದಾರಿಯಲ್ಲಿ ಹೊಸದಾಗಿ ಕಟ್ಟಿದ ಅಂಗಡಿಯ ಮೇಲೆ ತೆಂಗಿನ ಮರ ಉರುಳಿಬಿದ್ದು ಅಪಾರ ನಷ್ಟ ಸಂಭವಿಸಿದೆ. ಬಿಜ್ಜೂರು, ರುದ್ರಪಾದ ಸೇರಿದಂತೆ ಸಮುದ್ರದ ಬದಿಯಲ್ಲಿ ಹಲವು ಮರಗಳು ಗಾಳಿಗೆ ನೆಲಕ್ಕೆ ಉರುಳಿದೆ. ನಷ್ಟ ಎಷ್ಟಾಗಿದೆ ಎಂದು ಅಂದಾಜಿಸಬೇಕಿದೆ.
ಗಾಳಿಯ ಸಂಗಡ ಮಳೆಯೂ ಬರುತ್ತಿದ್ದು ಆದರೆ ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.