ಆಗಸ್ಟ್ನಲ್ಲಿ ನಿರಂತರ ಸುರಿದ ಮಳೆಗೆ ಇಲ್ಲಿನ ಗಣೇಶನಗರದಲ್ಲಿ ಅನೇಕರು ಮನೆ ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರ ವಿತರಿಸಿದ್ದ ತಾಲ್ಲೂಕು ಆಡಳಿತ ಅದನ್ನು ವಾಪಸ್ ಪಡೆದಿದೆ. ‘ಆಗಸ್ಟ್ 14ರಂದು ₹ 95,100 ಪರಿಹಾರ ಮೊತ್ತ ಜಮಾ ಮಾಡಿದ್ದ ಆಡಳಿತ 21ರಂದು ಅದನ್ನು ವಾಪಸ್ ಪಡೆದಿದೆ. ಈಗ ಹಣವೂ ಇಲ್ಲ, ಮನೆಯೂ ಇಲ್ಲದಂತಾಗಿದೆ. ತಾತ್ಕಾಲಿಕ ಶೆಡ್ನಲ್ಲಿ ಉಳಿದಿದ್ದೇವೆ. ಸರ್ಕಾರ ಮನೆ ಕಟ್ಟಿಕೊಳ್ಳಲು ನಮಗೆ ನೆರವು ನೀಡಬೇಕು’ ಎಂದು ನಿರ್ಮಲಾ ಬೋವಿವಡ್ಡರ್ ವಿನಂತಿಸಿದರು.