ಈ ಕ್ಯಾಲೆಂಡರ್ನಲ್ಲಿ ಆಂಬ್ಯುಲೆನ್ಸ್ ಸಂಪರ್ಕ ಸಂಖ್ಯೆ, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿ ಸಂಪರ್ಕ ಸಂಖ್ಯೆ, ಸಾಮಾಜಿಕ ಭದ್ರತಾ ಯೋಜನೆಗಳ ವಿವರ, ಅದಕ್ಕೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳು, ಅಂಚೆ ವಿಮಾ ಯೋಜನೆ ಮಾಹಿತಿಗಳನ್ನು ಸೇರಿಸಲಾಗಿದೆ. ‘ವ್ಯಾಪಾರಕ್ಕೆ ಬರುವವರು ಮೋಸ ಮಾಡಿದರೆ, ಅವರು ಅನುಮತಿ ಪಡೆಯುವಾಗ ನೀಡಿದ ದಾಖಲೆ ಆಧರಿಸಿ, ಪೊಲೀಸ್ ದೂರು ದಾಖಲಿಸಲು ಸಾಧ್ಯವಾಗುತ್ತದೆ. ಒಂದೆರಡು ಪ್ರಕರಣಗಳು ನಡೆದಾಗ ನಾವು ಅನುಷ್ಠಾನಗೊಳಿಸಿರುವ ಈ ಯೋಜನೆ ಸಹಾಯಕ್ಕೆ ಬಂತು’ ಎನ್ನುತ್ತಾರೆ ಕಾರ್ಯದರ್ಶಿ ಗಣೇಶ ಹೆಗಡೆ.