‘ಗ್ರಾಮ ಪಂಚಾಯಿತಿಗೆ ಆದಾಯ, ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಆ ದಾರಿಯಲ್ಲಿದ್ದ ಜಾರುವ ಕಲ್ಲು ಬಂಡೆ ತೆರವುಗೊಳಿಸಲಾಗಿದೆ. ಸ್ವಲ್ಪ ಅಗಲವಾದ ರಸ್ತೆಯಾಗಿ ದುರಸ್ತಿ ಮಾಡಿದ್ದೇವೆಯೇ ವಿನಾ ಮರಗಳ ಮಾರಣ ಹೋಮ ಮಾಡಿಲ್ಲ. ಒಣಗಿ ಬಿದ್ದ, ಗಾಳಿಗೆ ಬಿದ್ದ ಮರಗಳನ್ನು ಗ್ರಾಮ ಪಂಚಾಯಿತಿಯವರೇ ಬೀಳಿಸಿದ್ದು ಎಂಬಂತೆ ಬಿಂಬಿಸಲಾಗಿದೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಈ ಆರೋಪವು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯ ಸಂದರ್ಭದ ಮುಂದುವರಿದ ಭಾಗವಾಗಿದೆ’ ಎಂದು ಅವರು ಆರೋಪಿಸಿದ್ದಾರೆ.