ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಂಗಾ ದರದಲ್ಲಿ ಗಮನಾರ್ಹ ಇಳಿಕೆ

ತರಕಾರಿ ದರ ಸ್ಥಿರ: ಗೋಕರ್ಣದ ಬದನೆಕಾಯಿಗೆ ಉತ್ತಮ ಬೇಡಿಕೆ
Last Updated 5 ಮಾರ್ಚ್ 2020, 13:46 IST
ಅಕ್ಷರ ಗಾತ್ರ

ಕಾರವಾರ: ನಗರದ ಮಾರುಕಟ್ಟೆಯಲ್ಲಿ ಹಿಂದಿನ ವಾರ ಇಳಿಕೆಯಾಗಿದ್ದ ತರಕಾರಿ ದರವು ಈ ವಾರ ಸ್ಥಿರವಾಗಿದೆ. ದಿನಸಿ ದರದಲ್ಲಿ ಅಲ್ಪ ಇಳಿಕೆ ಕಂಡಿದೆ.

ಈರುಳ್ಳಿ ಪ್ರತಿ ಕೆ.ಜಿ.ಗೆ ₹ 30ರ ದರದಲ್ಲಿ ವಹಿವಾಟು ಕಾಣುತ್ತಿದೆ. ಟೊಮೆಟೊ ₹ 20, ಕ್ಯಾರೆಟ್ ₹ 50, ಹೂಕೋಸು ₹ 30, ಕ್ಯಾಬೇಜ್₹ 20, ಆಲೂಗಡ್ಡೆ₹ 30ರ ದರ ಹೊಂದಿವೆ. ಬೀನ್ಸ್₹ 40, ಕ್ಯಾಪ್ಸಿಕಂ ₹ 50, ಮೆಣಸಿನಕಾಯಿ ₹ 50, ಬೀಟ್‌ರೂಟ್₹ 40, ಬೆಂಡೆಕಾಯಿ₹ 40 ಬೆಲೆಯಲ್ಲಿ ಬಿಕರಿಯಾಗುತ್ತಿದೆ.

ಬಾಯಲ್ಲಿ ನೀರೂರಿಸುವತೋತಾಪುರಿ ಮಾವು ಮಾರುಕಟ್ಟೆಗೆ ಬಂದಿದೆ.₹ 100ಕ್ಕೆ ಮೂರು,ನಾಲ್ಕು ಸಿಗುತ್ತಿವೆ. ಅಡುಗೆಗೆ ಬಳಸುವ ಸಣ್ಣ ಗಾತ್ರದ ಹಲಸು ಒಂದಕ್ಕೆ₹ 20ರಲ್ಲಿ ಮಾರಾಟವಾಗುತ್ತಿದೆ. ಗೋಕರ್ಣದ ಗೆಣಸಿಗೆ ಈಗಲೂ ಬೇಡಿಕೆಯಿದ್ದು, ಪ್ರತಿ ಕೆ.ಜಿ.ಗೆ ₹ 20ರಿಂದ₹ 30ರವರೆಗೆ ಇದೆ.ಸುವರ್ಣಗಡ್ಡೆ ಒಂದಕ್ಕೆ ₹ 200ರ ದರವಿದೆ. ಗೋಕರ್ಣದ ಬದನೆಕಾಯಿಗೆ ಉತ್ತಮ ಬೇಡಿಕೆಯಿದ್ದರೂ ಆವಕ ಕಡಿಮೆಯಿದೆ. ಹಾಗಾಗಿ ಗ್ರಾಹಕರ ಕೈಗೆ ಸಿಗುತ್ತಿಲ್ಲ.

ದಿನಸಿಯಲ್ಲಿ ಇಳಿಕೆ: ಈ ಮೊದಲು ಸ್ವಸ್ತಿಕ್ ಹಳೆಯ ಅಕ್ಕಿಯು 25 ಕೆ.ಜಿ. ಚೀಲವೊಂದಕ್ಕೆ₹ 1,000 ಬೆಲೆಯನ್ನು ಹೊಂದಿತ್ತು. ಸದ್ಯ₹ 50ರಷ್ಟು ಇಳಿಕೆ ಕಂಡು₹ 950ರ ದರದಲ್ಲಿ ಬಿಕರಿಯಾಗುತ್ತಿದೆ. ಶೇಂಗಾ₹ 40ರಷ್ಟು ಇಳಿಕೆಯಾಗಿ₹ 120ರ ದರದಲ್ಲಿ ಮಾರಾಟ ಕಾಣುತ್ತಿದೆ. ಸಕ್ಕರೆ₹ 40,ಪಾಮ್ ಆಯಿಲ್‌ ಲೀಟರ್‌ಗೆ₹ 90, ಜೋಳ₹ 38, ಬ್ಯಾಡಗಿ ಮೆಣಸು₹ 240, ತೊಗರಿಬೇಳೆ₹ 100ರಲ್ಲಿ ಸ್ಥಿರವಾಗಿದೆ.

ಹಸಿರು ದ್ರಾಕ್ಷಿಯ ದರದಲ್ಲಿ ₹ 70ರಿಂದ ₹ 80ಕ್ಕೆ ಏರಿಕೆಯಾಗಿದೆ.ಕಪ್ಪು ದ್ರಾಕ್ಷಿ ₹ 120, ಮೂಸಂಬಿ ₹ 70, ದಾಳಿಂಬೆ₹ 120, ಸಪೋಟಾ₹ 100ರಲ್ಲಿ ಗ್ರಾಹಕ ಕೊಂಡುಕೊಳ್ಳುತ್ತಿದ್ದಾನೆ. ಸೇಬು ಪ್ರತಿ ಕೆ.ಜಿ.ಗೆ₹ 120ರಿಂದ₹ 180ರವರೆಗೂ ಇದೆ. ಇರಾನಿ ಸೇಬು ದುಬಾರಿಯಾಗಿದ್ದರೂ ಉತ್ತಮ ವ್ಯಾಪಾರ ವಹಿವಾಟನ್ನು ಕಾಣುತ್ತಿದೆ.

ಮಂಡ್ಯದಿಂದ ಆವಕವಾಗುವ ಬೆಲ್ಲ ₹ 48, ಮಹಾಲಿಂಗಪುರದ ಬೆಲ್ಲ ₹ 50, ಜೋನಿಬೆಲ್ಲ ₹ 80, ಜೇನುತುಪ್ಪ ₹ 270ರಲ್ಲಿ ಬಿಕರಿಯಾಗುತ್ತಿವೆ.ಕುಂದಾಪುರದಿಂದ ಆವಕಗೊಂಡ ಕಲ್ಲಂಗಡಿ ಹಣ್ಣನ್ನು ಕೆ.ಜಿ.ಗೆ ₹ 20ರ ಲೆಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ದೊಡ್ಡ ಗಾತ್ರದ ಒಂದು ಹಣ್ಣಿಗೆ ₹ 120ರವರೆಗೂ ಬೆಲೆಯಿದೆ. ಆಂಧ್ರಪ್ರದೇಶದಿಂದ ಆವಕಗೊಂಡಿರುವ ಸಣ್ಣ ಗಾತ್ರದ ಕಲ್ಲಂಗಡಿ. ದರವು ₹ 70ರಿಂದ₹ 100ರವರೆಗೆ ಇದೆ.

ಸಣ್ಣ ಗಾತ್ರದ ಬಂಗಡೆ ₹100ಕ್ಕೆ ಐದರಿಂದ ಆರುಸಿಗುತ್ತಿದೆ. ಪಾಂಫ್ಲೆಟ್ ₹ 500ರಿಂದ₹ 600ರವರೆಗೆ ಇದೆ. ಲುಸ್ಕಾ ಒಂದು ಪಾಲಿಗೆ ₹ 200, ಬೆಳುಂಜೆ ₹ 100, ಲೆಪ್ಪೆ ₹ 100, ಸೋಂದಾಳೆ ₹ 200, ಇಸೋಣ್₹ 250 ಇದೆ. ಫಾರಂ ಕೋಳಿಯ ದರ ₹ 180, ನಾಟಿಕೋಳಿಗೆ ₹ 700 ಇದೆ. ಮಟನ್ ಪ್ರತಿ ಕೆ.ಜಿ.ಗೆ ₹ 550 ಹಾಗೂ ಚಿಕನ್ ₹ 220ರಲ್ಲಿ ವ್ಯಾಪಾರವಾಗುತ್ತಿದೆ.ಒಂದು ಮೊಟ್ಟೆಗೆ₹ 5 ಹಾಗೂ ಬೇಯಿಸಿದ ಮೊಟ್ಟೆಗೆ₹ 8 ಇದೆ.

ಮಾರಾಟವಿಲ್ಲದೇ ನಷ್ಟ: ಕಾರವಾರದ ಮಾರುಕಟ್ಟೆಗೆ ಬುಧವಾರ ಆವಕಗೊಂಡ ಸೊಪ್ಪುಗಳು ಅರ್ಧದಷ್ಟು ಬಿಕರಿಯಾಗದೇ ಕೊಳೆತು ಹೋಗಿವೆ. ಸುಮಾರು 50 ಕಟ್ಟುಗಳಷ್ಟು ಕೊತ್ತುಂಬರಿ ಸೊಪ್ಪು ಹಾಳಾಗಿದೆ. ಒಂದು ಕಟ್ಟು₹ 20ರ ಬೆಲೆ ಹೊಂದಿದೆ. ಹಾಗೆಯೇ 20 ಕಟ್ಟುಗಳಷ್ಟು ಪಾಲಕ್ ಸೊಪ್ಪು ಕೂಡ ಕೊಳ್ಳುವವರಿಲ್ಲದೇ ಕೊಳೆತಿದೆ ಎಂದು ವ್ಯಾಪಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT