ಯುವ ಪೀಳಿಗೆ ಜನಪದ ಹಾಡುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕವಿಯಾದವ ಅವ್ಯಕ್ತವನ್ನು ಆಲಿಸಬಲ್ಲ. ಅಕ್ಷತಾ ಕೃಷ್ಣಮೂರ್ತಿ ಈ ಗ್ರಂಥದ ಮೂಲಕ ಸುಕ್ರಿ ಗೌಡರ ಜೀವನ ಚಿತ್ರಣವನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕೃಷ್ಣಮೂರ್ತಿ ನಾಯಕ ಸ್ವಾಗತಿಸಿದರು. ಲೇಖಕಿ ಅಕ್ಷತಾ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ವಿಠ್ಠಲದಾಸ ಕಾಮತ್, ಲೇಖಕಿ ಡಾ. ಪ್ರೀತಿ ಭಂಡಾರಕರ್, ಸ್ಮಿತಾ ಕಾಯ್ಕಿಣಿ, ಲತಾ ವಿ. ಕಾಮತ್ ಉಪಸ್ಥಿತರಿದ್ದರು.