‘ಬೇಸಿಗೆಯ ನೀರಿನ ಬವಣೆಯಿಂದ ಬೇಸತ್ತಿದ್ದ ಸುಭಾಸ ನಗರದ ನಿವಾಸಿಗಳು ಸಭೆ ನಡೆಸಿ, ಮಳೆನೀರು ಇಂಗಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಒಮ್ಮತದಿಂದ ನಿರ್ಧರಿಸಿದರು. ಕೂಲಿ ಕೆಲಸವೇ ಜೀವನಾಧಾರವಾಗಿರುವ ಹಲವರು, ಎಂಟು ದಿನ ಹೊರಗಿನ ಕೆಲಸ ಬಿಟ್ಟು, ತಮ್ಮ ಮನೆಯಲ್ಲೇ ಕೂಲಿ ಮಾಡಿ, ನಾಲ್ಕು ಅಡಿ ಆಳದ ಗುಂಡಿ ತೆಗೆದು, ಅದಕ್ಕೆ ಸಿಮೆಂಟ್ ರಿಂಗ್ ಇಳಿಸಿದರು. ತಂತ್ರಜ್ಞರಿಂದ ಮಾಹಿತಿ ಪಡೆದು ವೈಜ್ಞಾನಿಕವಾಗಿ ಇಂಗುಗುಂಡಿ ರಚಿಸಿದರು’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ರಾಘವೇಂದ್ರ ನಾಯ್ಕ.