‘ಹವ್ಯಕ ಸಂಪ್ರದಾಯ ಮತ್ತು ವರ್ತಮಾನ’ ಕುರಿತು ಮಾತನಾಡಿದ ಡಾ.ಜಿ.ಎಸ್.ಹೆಗಡೆ, ‘ಹವ್ಯಕ ಸಮುದಾಯವನ್ನು ಉಳಿದವರು ನಂಬುವಂಥ ಪರಂಪರೆ ಮುಂದುವರಿಯಬೇಕಾಗಿದೆ. ಮದುವೆ ಸಂದರ್ಭದಲ್ಲಿ ಸಪ್ತಪದಿ ತುಳಿಯುವಾಗ ಮದುಮಗಳಿಗೆ ಹೇಳುವ ನೀನು ಅನ್ನ ನೀಡಬೇಕು, ಆರೋಗ್ಯ ನೀಡಬೇಕು, ಸಂಪತ್ತು ನೀಡಬೇಕು, ಸಂತೋಷ ನೀಡಬೇಕು, ಸಂತಾನ ನೀಡಬೇಕು, ಮತ್ತೆ ಮಿತ್ರೆಯೂ ಆಗಿರಬೇಕು ಎನ್ನುವ ವಿಚಾರ ಇಂದು ಹವ್ಯಕರ ಮನೆ ಮನೆ ತಲುಪಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.