ಐದು ಎಕರೆ ಬಾಳೆ ತೋಟ, 45 ಎಕರೆ ಜೋಳದ ಗದ್ದೆ ನೆಲಕಚ್ಚಿದೆ. ಕಂದಾಯ ಇಲಾಖೆ ಸಿಬ್ಬಂದಿ ಕ್ಷೇತ್ರ ಭೇಟಿ ನೀಡಿ, ಹಾನಿಯ ಅಂದಾಜು ಲೆಕ್ಕ ಹಾಕುತ್ತಿದ್ದಾರೆ. ಹೊಸಕೊಪ್ಪದ ನಾಗರಾಜ ಚೆನ್ನಯ್ಯ ಅವರ ಮನೆ ಹಾನಿಯಾಗಿ ₹ 75ಸಾವಿರ ನಷ್ಟ, ಬನವಾಸಿಮನೆಯ ಜೈರಾಬಿ ಶಿಕ್ಕಲಗಾರ ಅವರ ಮನೆ ಹಾನಿಯಿಂದ ₹ 10ಸಾವಿರ, ಗಣೇಶ ಪೂಜಾರ ಅವರ ಮನೆಯ ಚಾವಣಿ ಹಾರಿ ₹ 20ಸಾವಿರ ನಷ್ಟ ಸಂಭವಿಸಿದೆ. ಬನವಾಸಿ ನಾಡಕಚೇರಿಯ ಮೇಲ್ಚಾವಣಿ, ಸೋಲಾರ್ ಪ್ಯಾನಲ್ ಬೋರ್ಡ್ಗೆ ಧಕ್ಕೆಯಾಗಿ ₹ 20ಸಾವಿರ ನಷ್ಟವಾಗಿದೆ ಎಂದು ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ತಿಳಿಸಿದ್ದಾರೆ.