ಸಮರ್ಪಕ ಚರಂಡಿಯಿಲ್ಲದ ಕಾರಣ ನಗರದ ಯಲ್ಲಾಪುರ ನಾಕಾ ಸಮೀಪ ಆಶಾ ಪ್ರಭು ಆಸ್ಪತ್ರೆಯ ಎದುರು ರಾಜ್ಯ ಹೆದ್ದಾರಿಯ ಮೇಲೆ ನೀರು ನಿಂತಿದೆ. ಈ ನೀರಿನಲ್ಲೇ ವಾಹನಗಳು ಸಾಗುತ್ತಿವೆ. ಕೋವಿಡ್ 19 ಭಯದಿಂದ ಜನರು ಮನೆಯಿಂದ ಹೊರಬರುವುದು ಕಡಿಮೆಯಾಗಿದೆ. ಮಳೆಯೂ ಇದ್ದ ಕಾರಣ ಜನಸಂಚಾರ ಇನ್ನಷ್ಟು ವಿರಳವಾಗಿತ್ತು. ಹಗಲಿನಲ್ಲೂ ವಾಹನ ಸವಾರರು ಲೈಟ್ ಹಾಕಿಕೊಂಡು ವಾಹನ ಓಡಿಸುವುದು ಕಂಡುಬಂತು. ದಿನವಿಡೀ ಮೋಡ ಕವಿದ ವಾತಾವರಣದಿಂದ ಮೈ ಕೊರೆಯುವ ಚಳಿಯ ಅನುಭವವಾಗುತ್ತಿದೆ.