ನಿರ್ಜನ ಪ್ರದೇಶವಾಗಿರುವ ಈ ರಸ್ತೆಯ ಇಕ್ಕೆಲಗಳಲ್ಲಿ ದಿನ ಬೆಳಗಾಗುವಷ್ಟರಲ್ಲಿ ತ್ಯಾಜ್ಯಗಳ ರಾಶಿ ಬಿದ್ದಿರುತ್ತಿತ್ತು. ಅದನ್ನು ಸ್ವಚ್ಛಗೊಳಿಸಿದ್ದ ಹೆಬ್ಬಾರ್, ಕಸ ತಂದು ಎಸೆಯುತ್ತಿದ್ದ ಅನಾಗರಿಕರನ್ನು ಹಲವಾರು ಹಿಡಿದು, ಅವರಿಂದಲೇ ಆ ಕಸವನ್ನು ಎತ್ತಿಸಿದ್ದರು. ಇದರಿಂದ ಈ ಭಾಗದಲ್ಲಿ ಅಕ್ರಮವಾಗಿ ಕಸ ಎಸೆಯುವ ಪ್ರಮಾಣ ಕಡಿಮೆಯಾಗಿತ್ತು. ಹೀಗಾಗಿ, ವಾಯುವಿಹಾರಕ್ಕೆ ಹೋಗುವವರು ಖುಷಿಯಿಂದ ಈ ಮಾರ್ಗದಲ್ಲಿ ಓಡಾಡುತ್ತಿದ್ದರು. ಆದರೆ, ಸಂಜೆಯ ವೇಳೆ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವ ದೂರು ಬಂದ ಹಿನ್ನೆಲೆಯಲ್ಲಿ, ಎಂಟು ಸೋಲಾರ್ ದೀಪಗಳನ್ನು ಅಳವಡಿಸಿರುವ ಅವರು, ದಾರಿಹೋಕರ ಭಯವನ್ನು ನಿವಾರಿಸಿದ್ದರೆ.