‘ಮತೀಯವಾದವನ್ನು ಎಬ್ಬಿಸಿ ದೇಶವನ್ನು ಮತ್ತಷ್ಟು ವಿಭಜಿಸುವ ಸಂಚಿನ ಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ಶಾಲೆಗಳಲ್ಲಿ ಮತೀಯವಾದ, ಪ್ರತ್ಯೇಕತಾವಾದವನ್ನು ಬೆಳೆಸುವುದು ಸಮಾಜದ, ಶೈಕ್ಷಣಿಕ ದೃಷ್ಟಿಯಿಂದ ಒಳ್ಳೆಯದಲ್ಲ. ಇದನ್ನು ಕಾಂಗ್ರೆಸ್ ಬಿಡಬೇಕು. ಇದೇ ರೀತಿಯ ಓಲೈಕೆಯಿಂದ ದೇಶ ತುಂಡಾಯಿತು. ಅದಕ್ಕೆ ಜಿನ್ನಾ ಎಷ್ಟು ಕಾರಣವೋ ಕಾಂಗ್ರೆಸ್ ಅಷ್ಟೇ ಕಾರಣ’ ಎಂದು ಹೇಳಿದರು.