ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು 34 ವರ್ಷಗಳಿಂದ ಶಿಕ್ಷಕರ ಸಂಘಟನೆಯಂಥ ಸೇವೆಯಲ್ಲಿದ್ದೇನೆ. ಈಗಾಗಲೇ ಹಾವೇರಿ, ಗದಗ ಜಿಲ್ಲೆಯ ಪ್ರವಾಸ ಮಾಡಿದ್ದೇನೆ. ಅಲ್ಲೆಲ್ಲ ಶಿಕ್ಷಕರು ಈ ಬಾರಿ ಪ್ರತಿನಿಧಿಯ ಬದಲಾವಣೆಯ ಆಶಯ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳಿಂದ ಆಯ್ಕೆಯಾದವರಿಂದ ಏನೂ ಕೆಲಸಗಳಾಗಿಲ್ಲ ಎಂದು ಬಹಳ ಬೇಸರ ವ್ಯಕ್ತಪಡಿಸಿದ್ದಾರೆ’ ಎಂದರು.