ತಾಲ್ಲೂಕಿನ ಹೆಬ್ಬುಳ– ಮಾದನಗೇರಿಯ ರಾಜ್ಯ ಹೆದ್ದಾರಿಗೆ ಗಂಗಾವಳಿ ನದಿ ಮೇಲಿನ ಹೊಸಕಂಬಿ ಸೇತುವೆ ಕೊಂಡಿಯಾಗಿದೆ. ಇದು 1983ರಲ್ಲಿ ನಿರ್ಮಾಣವಾಗಿದ್ದು, ತಾಲ್ಲೂಕಿನ ಉದ್ದದ ಮತ್ತು ಹಳೆಯ ಸೇತುವೆಯಾಗಿದೆ. ಹುಬ್ಬಳ್ಳಿ ಮೂಲಕ ಗೋಕರ್ಣ, ಮಂಗಳೂರು, ಉಡುಪಿಗೆ ತೆರಳುವ ಪ್ರವಾಸಿಗರು ಇದೇ ಮಾರ್ಗದ ಮೂಲಕ ಸಾಗುತ್ತಾರೆ. ಇದೀಗ ಸೇತುವೆಯ ಮೇಲೆ ಬೃಹತ್ ಹೊಂಡಗಳಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.