‘ನಾವು ಹಲವಾರು ವರ್ಷಗಳಿಂದ ಇಲ್ಲಿ ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ರಸ್ತೆ ವಿಸ್ತರಣೆಯಬಳಿಕ ಗುಡ್ಡದ ಮಣ್ಣು ಕುಸಿಯಲಾರಂಭಿಸಿದೆ. ಜಿಲ್ಲಾಧಿಕಾರಿ ನಮ್ಮ ನೆರವಿಗೆ ಬರಬೇಕು. ರಾತ್ರಿಯೆಲ್ಲ ನಿದ್ದೆಬಿಟ್ಟು ಭಯದಲ್ಲಿ ನಾವು, ನಮ್ಮ ಮಕ್ಕಳುಕಾಲ ಕಳೆಯುವಂತಾಗಿದೆ. ಇಂತಹ ಪರಿಸ್ಥಿತಿ ಮತ್ಯಾರಿಗೂ ಬಾರದಿರಲಿ’ ಎನ್ನುತ್ತಾರೆ ಸ್ಥಳೀಯರಾದವಿಶ್ರಾಂತಿ ಕಾತ್ಯಾಯಣಿಕರ.