ಇಲ್ಲಿನ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ಅದಾಲತ್ನಲ್ಲಿ ದೇವಿಸರ ಗ್ರಾಮದ ವ್ಯಕ್ತಿ ಮತ್ತು ಗಣೇಶ ನಗರದ ಮಹಿಳೆ ಪುನಃ ಜತೆಯಾದರು. ಇದಕ್ಕೆ ಅವರ 17 ವರ್ಷದ ಮಗಳು ಕೂಡ ಸಾಕ್ಷಿಯಾದರು. ಮಗಳು ಒಂದೂವರೆ ವರ್ಷದ ಪುಟ್ಟ ಮಗುವಾಗಿದ್ದ ವೇಳೆ ಪತಿ, ಪತ್ನಿ ಕಾರಣಾಂತರದಿಂದ ದೂರವಾಗಿದ್ದರು. ವಿಚ್ಛೇದನ ಪ್ರಕರಣ ದಾಖಲಿಸಿದ್ದ ಪತ್ನಿ ಪತಿಯಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.