ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 'ಆನಂದ ಅತಿ ಚಿಕ್ಕ ವಯಸ್ಸಿನಲ್ಲೇ ರಾಜಕೀಯಕ್ಕೆ ಧುಮುಕಿದವರು. ಆದರೆ, ಈ ವಯಸ್ಸಿನಲ್ಲೇ ರಾಜ್ಯದಲ್ಲಿರುವ ಎಲ್ಲ ಪಕ್ಷಗಳಿಗೂ ಪಕ್ಷಾಂತರ ಮಾಡಿ ಬಂದಿದ್ದಾರೆ. ಹೀಗಾಗಿ, ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಸೇರಲು ಯಾವುದೇ ಪಕ್ಷ ರಾಜ್ಯದಲ್ಲಿಲ್ಲ. ನಾನೊಬ್ಬ ಟ್ರಾನ್ಸ್ ಪೋರ್ಟ್ ಉದ್ಯಮಿಯಾಗಿರುವುದರಿಂದ ಸ್ವಂತ ಖರ್ಚಿನಲ್ಲಿ ಉತ್ತರ ಭಾರತದಿಂದ ಪಕ್ಷಗಳ ಲೋಡ್ ಅನ್ನು ಇಲ್ಲಿಗೆ ತರುತ್ತೇನೆ. ಆ ಮೂಲಕ ಅವರಿಗೆ ಪಕ್ಷ ಸೇರಲು ಸಹಾಯ ಮಾಡುತ್ತೇನೆ' ಎಂದು ಕಾಲೆಳೆದರು.