ಹೋರಾಟಗಾರರ ಸಂಘದ ಪ್ರಮುಖ ಪ್ರಸಾದ ರೇವಣಕರ್ ಮಾತನಾಡಿ, ‘ಮೀನುಗಾರರ ಗುಡಿಸಲುಗಳನ್ನು ನೆಲಸಮ ಮಾಡಿ, ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿದರು.ಆದರೆ, ಮೀನುಗಾರರುಸೌಲಭ್ಯ ವಂಚಿತರಾದರು. ಮೀನು ಒಣಗಿಸಲೂ ಸ್ಥಳಾವಕಾಶವಿಲ್ಲ. ತಾಲ್ಲೂಕಿನ ಜನತೆಗೆ ಕಡಲತೀರ ಅವಶ್ಯವಿದ್ದು, ಉಳಿವಿಗೆ ಒಕ್ಕೊರಲಿನಿಂದ ಹೋರಾಡೋಣ’ ಎಂದು ಹೇಳಿದರು.