ಅರೆಬರೆ ಕೆಲಸ ನಡೆದಿರುವ ಈ ಮಾರ್ಗದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರ ಕಷ್ಟವಾಗುತ್ತಿದೆ. ೆರಡು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ಶಿರಸಿಮಕ್ಕಿ, ಹಾರುಗಾರ ಬಳಿ ನೀರು ತುಂಬಿಕೊಂಡಿದ್ದವು. ರಸ್ತೆಯಲ್ಲಿ ಅಲ್ಲಲ್ಲಿ ವಾಹನಗಳು ಹೂತುಬೀಳುವ ಆತಂಕವಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಕೆಲಸ ಆರಂಭಿಸಲಾಗಿದ್ದು ಮಳೆಯ ಕಾರಣ ಸ್ಥಗಿತಗೊಳಿಸಲಾಗಿದೆ. ಒಂದು ಪಕ್ಕ ಜಲ್ಲಿ ಹಾಸಿಡಲಾಗಿದ್ದು ಅಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇನ್ನೊಂದು ಪಕ್ಕದ ರಸ್ತೆಯ ಕೆಸರು ಗದ್ದೆಯಂತಾಗಿದೆ.