ಪ್ರೀತಿಸಿದ ಇವರಿಬ್ಬರು ಬನವಾಸಿಗೆ ಬಂದಿರುವ ವಿಷಯ ತಿಳಿದ ಯುವತಿಯ ಚಿಕ್ಕಪ್ಪ ಹೊಳಿಯಪ್ಪ ಶಾನವಳ್ಳಿ, ಸೋಮವಾರ ಸಂಬಂಧಿಕರ ಜೊತೆಗೂಡಿ ಯುವಕನ ಮನೆಗೆ ಬಂದು, ಇವರಿಬ್ಬರೂ ವಿವಾಹವಾಗಿರುವುದಕ್ಕೆ ಯಾವುದೇ ಅಧಿಕೃತ ದಾಖಲೆಯ ಇಲ್ಲವೆಂದು ಹೇಳಿ, ಆಕೆಯನ್ನು ಅಪಹರಿಸುವ ಯೋಜನೆ ರೂಪಿಸಿದ್ದರು. ಆದರೆ, ಅವರು ಬಂದಾಗ ನವಜೋಡಿ ಮನೆಯಲ್ಲಿ ಇರಲಿಲ್ಲ. ಈ ಸಂದರ್ಭದಲ್ಲಿ ಕೃಷ್ಣ ಚನ್ನಯ್ಯ ಅವರ ಸಹೋದರ ಹಾಗೂ ಮಾವನ ಮೇಲೆ ಅವರು ಹಲ್ಲೆ ನಡೆಸಿದ್ದಾರೆ. ನಂತರ ಎರಡೂ ಕುಟುಂಬದವರು ಹೊಡೆದಾಡಿಕೊಂಡಿದ್ದಾರೆ ಎಂದು ಬನವಾಸಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ವಿವರಿಸಲಾಗಿದೆ. ಎರಡೂ ಕುಟುಂಬಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಗಾಯಾಳುಗಳನ್ನು ಶಿರಸಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.