ನಗರದಲ್ಲಿರುವ ಕ್ಯಾಂಪ್ಕೊ ಪ್ರಾದೇಶಿಕ ಕಚೇರಿಯಲ್ಲಿ ಸಂಸ್ಥೆಯ ನಿರ್ದೇಶಕ ಶಂಭುಲಿಂಗ ಹೆಗಡೆ ಚಾಕೊಲೆಟ್ ಬಿಡುಗಡೆಗೊಳಿಸಿದರು. ‘ರೈತರ ಹಿತಕಾಯುವ ಉದ್ದೇಶಕ್ಕೆ ಸ್ಥಾಪಿತವಾದ ಸಂಸ್ಥೆ ಪರಿಸ್ಥಿತಿಗೆ ತಕ್ಕಂತೆ ಸುಧಾರಣೆ ಕಾಣುತ್ತಿದೆ. ಅಡಿಕೆ, ರಬ್ಬರ್, ಕೋಕೊ, ಕಾಳುಮೆಣಸು ಬೆಳೆಗಳ ಮೌಲ್ಯವರ್ಧನೆಗೆ ಆದ್ಯತೆ ನೀಡಲಾಗಿತ್ತು. ಈಗ ಹಣ್ಣುಗಳಿಗೂ ಆದ್ಯತೆ ನೀಡಿ ಉತ್ಪನ್ನ ಸಿದ್ಧಗೊಳ್ಳುತ್ತಿದೆ’ ಎಂದರು.