‘ಪ್ರವಾಹದಿಂದ ಮನೆ ಕುಸಿದಿರುವ ಪ್ರಕರಣಗಳು ಇದ್ದಲ್ಲಿ, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ವಿಷಯದ ಸತ್ಯಾಸತ್ಯತೆ ಅರಿತು ತಕ್ಷಣ ₹ 10ಸಾವಿರ ಹಣವನ್ನು ತೊಂದರೆಗೊಳಗಾದವರ ಬ್ಯಾಂಕ್ ಖಾತೆಗೆ ಹಾಕಬೇಕು ಅಥವಾ ಚೆಕ್ ಮೂಲಕ ಪರಿಹಾರ ನೀಡಬೇಕು. ಹೊಸ ಮನೆ ಕಟ್ಟಲು ನೆರವು ನೀಡುವಾಗ ವಿವರ ಪರಿಶೀಲನೆ ನಡೆಸಿ. ತಾತ್ಕಾಲಿಕ ನೆರವು ನೀಡಲು ತೀರಾ ಯೋಚನೆ ಮಾಡಬೇಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.