ಭಾನುವಾರ ಮಧ್ಯಾಹ್ನ ಮಾರಿಗುಡಿಯಿಂದ ಹೊರಟ ರೋಡ್ ಶೋದಲ್ಲಿ ಜೆಡಿಎಸ್–ಕಾಂಗ್ರೆಸ್ನ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಕೂಡ ರ್ಯಾಲಿಯಲ್ಲಿದ್ದರು. ಅರ್ಧದಲ್ಲಿ ಬಂದು ಸೇರಿಕೊಂಡ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರು ತೆರೆದ ವಾಹನದಲ್ಲಿ ಜನರಿಗೆ ಕೈ ಮುಗಿಯುತ್ತ ಸಾಗಿದರು. ಆಗಲೂ ಅಂತರವನ್ನು ಕಾಯ್ದುಕೊಂಡಿದ್ದ ಭೀಮಣ್ಣ, ನಂತರ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ವಾಹನವೇರಿ ಅಸ್ನೋಟಿಕರ್ ಜತೆ ನಿಂತರು. ಆದರೆ, ಅಸ್ನೋಟಿಕರ್ ಭಾಷಣ ಮಾಡುತ್ತಿರುವಾಗಲೇ, ಮುಂದೆ ಸಾಗಿ ಎಂದು ಸೂಚನೆ ನೀಡುವ ಮೂಲಕ ಭೀಮಣ್ಣ ಅಸಮಾಧಾನ ಹೊರಹಾಕಿದರು.