ತಾಲ್ಲೂಕಿನ ವ್ಯಾಪ್ತಿಯ ಜೋಗದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಗೇರಿ ಒಂದೂ ದಿನವೂ ನಮ್ಮಲ್ಲಿ ರಸ್ತೆಗಳು ಕೆಟ್ಟಿವೆ ಎಂದು (ನಮ್ಮ ಸರ್ಕಾರವಿದ್ದಾಗ) ಸದನದಲ್ಲಿ ಪ್ರಶ್ನೆ ಎತ್ತಿಲ್ಲ. ನನ್ನ ಬಳಿಯೂ ಕೇಳಿಲ್ಲ, ಕೇಳಿದರೆ ನಾನು ಕೊಡುತ್ತಿದ್ದೆ. ಇಡೀ ರಾಜ್ಯದಲ್ಲಿ ರಸ್ತೆಗೆ ಅನುದಾನ ಕೊಟ್ಟಿದ್ದೆವಲ್ಲ. ಶಿಕಾರಿಪುರಕ್ಕೆ, ಯಡಿಯೂರಪ್ಪನವರಿಗೆ ಕೊಟ್ಟಿಲ್ಲವೇ? ಇಲ್ಲಿನ ಸಂಸದರು ಕೂಡ ಬಿಜೆಪಿಯವರಲ್ಲವಾ, ಅವರು ಕೇಂದ್ರ ರಸ್ತೆ ನಿಧಿ ಯಾಕೆ ತಂದಿಲ್ಲ? ಸಂಸದರು ಎಂದರೆ ಬರಿ ಬೆಂಕಿ ಹಚ್ಚುವ ಕೆಲಸ ಮಾಡಬೇಕಾ’ ಎಂದು ಖಾರವಾಗಿ ಪ್ರಶ್ನಿಸಿದರು.