’ಬೂತ್ ಮಟ್ಟದ ಸಮಿತಿ ಎರಡನೇ ಸುತ್ತಿನ ಪ್ರಚಾರ ಪೂರ್ಣಗೊಳಿಸಿದೆ. ಪ್ರತಿ ಬೂತ್ನಲ್ಲಿ 10 ಜನರ ಸಮಿತಿಗೆ ಒಬ್ಬರು ಸಂಯೋಜಕರು ಕೆಲಸ ಮಾಡುತ್ತಿದ್ದಾರೆ. ತಂಡದಲ್ಲಿ ಹೋಗಿ, ಪ್ರತಿ ಮನೆಯ ಮತದಾರರನ್ನು ಭೇಟಿ ಮಾಡಿ, ಬ್ಯಾಲೆಟ್ ಪೇಪರ್ ಮಾದರಿಯ ಕರಪತ್ರ, ಹಿಂದಿನ ಸರ್ಕಾರದ ಸಾಧನೆಯ ಮಾಹಿತಿ ನೀಡಿ, ಮತ ಕೇಳುತ್ತಿದ್ದೇವೆ. ಜನರು ಪ್ರತಿಕ್ರಿಯೆ ಕೆಲಸ ಮಾಡಲು ಉತ್ಸಾಹ ನೀಡುತ್ತಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತೆ ಜ್ಯೋತಿ ಗೌಡ ಹೇಳಿದರು.