ಶಿರಸಿ: ಕೆ.ಆರ್.ರಮೇಶ್ ಕುಮಾರ್ ಒಬ್ಬ ಬುದ್ಧಿವಂತ ರಾಜಕಾರಣಿ. ಸದನದಲ್ಲಿ ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿ ಎಡವಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಇಲ್ಲಿ ಶನಿವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಬುದ್ಧವಂತಿಕೆಯ ಮಾತನಾಡಲು ಹೋಗಿ ದೇಶವ್ಯಾಪಿ ಮಹಿಳೆಯರನ್ನು ಎದುರು ಹಾಕಿಕೊಂಡಿದ್ದಾರೆ. ರಾಜಕಾರಣಿಗಳು ಸದನದ ಒಳಗೆ, ಹೊರಗೆ ಹೇಗಿರಬೇಕೆಂದು ಇನ್ನಷ್ಟು ಹೆಚ್ಚು ಜಾಗರೂಕರಾಗಿರಬೇಕಿದೆ’ ಎಂದರು.
‘ಸಚಿವ ಭೈರತಿ ಬಸವರಾಜ್ ಮೇಲಿನ ಆರೋಪ ಸತ್ಯಕ್ಕೆ ದೂರವಾಗಿದೆ. ಅವರು ರಾಜೀನಾಮೆ ನೀಡುವ ಪ್ರಶ್ನೆಯೆ ಇಲ್ಲ’ ಎಂದರು.
‘ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ. ಅಲ್ಲಿ ಎಂ.ಇ.ಎಸ್.ನವರು ಪುಂಡಾಟಿಕೆ ಮಾಡುವುದನ್ನು ಸಹಿಸಲ್ಲ. ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡಿದ್ದಕ್ಕೆ ಹತಾಶರಾಗಿ ಪುಂಡಾಟಿಕೆ ಮಾಡುತ್ತಿದ್ದಾರೆ’ ಎಂದರು.