40 ವರ್ಷಗಳಿಂದ ಯಕ್ಷಗಾನ ಭಾಗವತರಾಗಿ ಈಚೆಗೆ ಎಲ್ಲ ವಯೋಮಾನದವರಿಗೆ ಯಕ್ಷಗಾನ ಕಲಿಸುತ್ತಿರುವ ಉಮೇಶ ಭಟ್ಟ ಬಾಡ ಅವರ ಮೊದಲ ಗುರು ಕಡತೋಕಾ ನಾರಾಯಣ ಭಂಡಾರಿ. ನಂತರ ಅವರು ಕೋಟದ ಯಕ್ಷಗಾನ ಕಲಾ ಕೇಂದ್ರದಲ್ಲಿ ನಾರಾಣಪ್ಪ ಉಪ್ಪೂರು ಅವರಲ್ಲಿ ಭಾಗವತಿಕೆ ಕಲಿತರು. ನಂತರ ಸಾಲಿಗ್ರಾಮ, ಪಂಚಲಿಂಗ, ಬಚ್ಚಗಾರು, ಮಾರಿಕಾಂಬಾ, ಮುಲ್ಕಿ, ಗೋಳಿಗರಡಿ, ಗುಂಡಬಾಳ ಹಾಗೂ ಕುಮಟಾ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದರು.