ಸಾಗರ ಜೀವವಿಜ್ಞಾನಿ, ಹೊನ್ನಾವರದ ಕೆಳಗಿನಪಾಳ್ಯದ ಡಾ.ಪ್ರಕಾಶ್ ಮೇಸ್ತ ಅವರು ಎನ್ಡಿಎಂಎನ ದೆಹಲಿ ಕಚೇರಿಗೆ ಇ–ಮೇಲ್ ಮೂಲಕ, ‘ಶರಾವತಿ ನದಿ ತಟದಲ್ಲಿರುವ ಮನೆಯೊಂದು ಅಪಾಯದಲ್ಲಿದೆ. ಆ ಮನೆಯಲ್ಲಿದ್ದವರನ್ನು ರಕ್ಷಿಸಬೇಕು’ ಎಂದು ದೂರು ನೀಡಿದ್ದರು. ಇದನ್ನು ಆಧರಿಸಿ, ಅಧಿಕಾರಿಗಳೂ ಮೇಸ್ತ ಅವರಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಂಡು, ತುರ್ತು ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ ಪ್ರಕರಣ ವರ್ಗಾಯಿಸಿದರು. ಜಿಲ್ಲಾಧಿಕಾರಿ ಆದೇಶದಂತೆ ಹೊನ್ನಾವರ ತಹಶೀಲ್ದಾರ್ ವಿವೇಕ ಶೇಣ್ವಿ ನೇತೃತ್ವದ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದಾಗ, ಅದು ಸುಳ್ಳು ಎಂಬುದು ಗೊತ್ತಾಗಿದೆ.