ತಾಲ್ಲೂಕಿನಕೊಠಾರ ಗ್ರಾಮದ ಬಾಲಕೃಷ್ಣ ಕೊಠಾರಕರ ಅತಂತ್ರ ಸ್ಥಿತಿಯಲ್ಲಿದ್ದು, ತಮ್ಮ ಪರಿಸ್ಥಿತಿಯ ಬಗ್ಗೆ ವಿಡಿಯೊ ಸಂದೇಶದಲ್ಲಿ ವಿವರಿಸಿದ್ದಾರೆ. ಅವರು ‘ಕಾರ್ಪೊರೇಷನ್ ಮುಲ್ತಾಖಾ ಅಲ್ ಅಸ್ರಾರ್’ ಎಂಬ ಸಂಸ್ಥೆಯ ವಾಹನ ಚಾಲಕನ ನೌಕರಿಗಾಗಿ ಕಳೆದ ವರ್ಷ ಆಗಸ್ಟ್ನಲ್ಲಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು.ಆದರೆ, ಅಲ್ಲಿ ತನಗೆ ರಸ್ತೆ ಬದಿಯಿಂದ ಕಾಗದ ಹೆಕ್ಕುವ ಕೆಲಸ ನೀಡಲಾಯಿತು. ತಾನಿರುವ ಊರು ಹಳ್ಳಿಯಾಗಿದ್ದು, ರಸ್ತೆಗಳ ಪರಿಚಯವಿಲ್ಲ. ಎಲ್ಲಿಗೆ ಹೋಗಬೇಕು ಎಂದು ತಿಳಿಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.