ಯಕ್ಷಗಾನ ಲೋಕದ ದಿಗ್ಗಜರಾದ ನಾರಾಯಣಪ್ಪ ಉಪ್ಪೂರು, ತಿಮ್ಮಪ್ಪ ನಾಯಕ ಬೆಳಿಂಜೆ, ದುರ್ಗಪ್ಪ ಗುಡಿಗಾರ್ ಮುಂತಾದ ಕಲಾವಿದರ ಮಾರ್ಗದರ್ಶನ ಹಾಗೂ ಮಹಾಬಲ ಹೆಗಡೆ ಕೆರೆಮನೆ, ಶಂಭು ಹೆಗಡೆ ಕೆರೆಮನೆ, ರಾಮಚಂದ್ರ ಹೆಗಡೆ ಚಿಟ್ಟಾಣಿ, ಪಿ.ವಿ.ಹಾಸ್ಯಗಾರ, ಶೇಣಿ ಗೋಪಾಲಕೃಷ್ಣ ಭಟ್ಟ, ವಾಸುದೇವ ಸಾಮಗ, ನೆಬ್ಬೂರು ನಾರಾಯಣ ಭಾಗ್ವತ, ಕೊಳಗಿ ಅನಂತ ಹೆಗಡೆ ಮತ್ತಿತರ ಅನೇಕ ಕಲಾವಿದರ ಒಡನಾಟ ಇವರನ್ನು ಮತ್ತಷ್ಟು ಪಕ್ವಗೊಳಿಸಿತು.