‘ಹಿನ್ನೀರು ಪ್ರದೇಶದಲ್ಲಿ ಸುಮಾರು 4 ಸಾವಿರ ರೈತರ ಒಟ್ಟೂ 2,500 ಹೆಕ್ಟೇರ್ ಗಜನಿ ಭೂಮಿ ಇದೆ. 1973ರಲ್ಲಿ ರಾಮಕೃಷ್ಣ ಹೆಗಡೆ ಅವರು ಸಚಿವರಾಗಿದ್ದಾಗ ಹಿನ್ನೀರು ಪ್ರದೇಶದ ಕಗ್ಗ ಭತ್ತದ ಗದ್ದೆಗಳಿಗೆ ಖಾರ್ಲ್ಯಾಂಡ್ ಬಂಡ್ ನಿರ್ಮಿಸಲಾಗಿತ್ತು. ಇದು ಮಳೆಗಾಲದಲ್ಲಿ ನೆರೆ ನೀರು, ಬೇಸಿಗೆಯಲ್ಲಿ ಉಪ್ಪು ನೀರು ನುಗ್ಗುವುದನ್ನು ತಡೆಯಲು ಸಹಕಾರಿಯಾಗಿತ್ತು. ಇದರಿಂದ ಪ್ರತಿ ವರ್ಷ ಇಲ್ಲಿ 45 ಸಾವಿರ ಕ್ವಿಂಟಲ್ ಕಗ್ಗ ಭತ್ತ ಬೆಳೆಯುತ್ತಿದ್ದರು. ಇಲ್ಲಿ ಹಿಂಗಾರು ಹಂಗಾಮಿನಲ್ಲಿ ಹತ್ತಾರು ಟನ್ ನೈಸರ್ಗಿಕ ಮೀನು, ಸೀಗಡಿ, ಏಡಿ ಬೆಳೆಸಲಾಗುತ್ತಿತ್ತು’ ಎಂದು ಹೇಳಿದರು.