ಕಾಳಿಂಗ ಸರ್ಪವು ಬುಸುಗುಟ್ಟುವ ಸದ್ದಿನಿಂದ ಬೆದರಿದ ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಬಂದ ಸಿಬ್ಬಂದಿ, ಎರಡೂ ಹಾವುಗಳನ್ನು ಬೇರ್ಪಡಿಸಲು ಪ್ರಯತ್ನಿಸಿದರು. ಅಷ್ಟರಲ್ಲಿ ಕಾಳಿಂಗ ಸರ್ಪವು ಪೊದೆಗಳ ಮಧ್ಯೆ ಸಾಗಿ ಮರೆಯಾಯಿತು. ಗಾಯಗೊಂಡ ಹೆಬ್ಬಾವನ್ನು ಅರಣ್ಯ ಇಲಾಖೆಯ ಬೀಟ್ ಸಿಬ್ಬಂದಿ ಗೋಪಾಲ ನಾಯ್ಕ ರಕ್ಷಿಸಿದರು.