ಮೇ 14 ರಂದು ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಿದ್ದಾಪುರ ತಾಲ್ಲೂಕಿನ ಬಾಳೆಕೊಪ್ಪದ ಸುಬ್ರಾಯ ಗಣಪತಿ ಹೆಗಡೆ ಅವರಿಗೆ ಕೃಷಿ ಕಂಠೀರವ ಪ್ರಶಸ್ತಿ, ಶಿರಸಿ ತಾಲ್ಲೂಕು ಕ್ಯಾದಗಿಮನೆಯ ನೇತ್ರಾವತಿ ವೆಂಕಟ್ರಮಣ ಹೆಗಡೆಗೆ ಕೃಷಿ ಸಾಧಕ ಮಹಿಳೆ ಪ್ರಶಸ್ತಿ, ಯಲ್ಲಾಪುರ ತಾಲ್ಲೂಕು ಬಾಳೆಹದ್ದದ ಶಾಂತಾರಾಮ ಸುಬ್ರಾಯ ಹೆಗಡೆ ಕುಟುಂಬಕ್ಕೆ ಉತ್ತಮ ಅವಿಭಕ್ತ ಕೃಷಿ ಕುಟುಂಬ ಪ್ರಶಸ್ತಿ, ಸಿದ್ದಾಪುರ ತಾಲ್ಲೂಕು ಮನೇನಳ್ಳಿಯ ಮಾಬ್ಲು ಬಂಗಾರ್ಯ ಗೌಡಗೆ ಸಾಧಕ ಕೃಷಿ ಕುಶಲಕರ್ಮಿ ಪ್ರಶಸ್ತಿ, ಬೊಮ್ಮನಳ್ಳಿ ಸಮೀಪದ ಗಲಗದಮನೆಯ ಗುರುನಾಥ ಗಣಪತಿ ಹೆಗಡೆಗೆ ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಪ್ರದಾನ ಮಾಡಲಾಗುವುದು.