‘ಕೆಲವು ಊರುಗಳಲ್ಲಿ ನಿರ್ದಿಷ್ಟ ಸಮುದಾಯದವರು ಮಾತ್ರ ಇದ್ದರೆ, ಅವರು ಯಾವುದೋ ಪಕ್ಷ, ವ್ಯಕ್ತಿಗೆ ಅಂಟಿಕೊಂಡಿರುತ್ತಿದ್ದರು. ಬೇರೆ ಪಕ್ಷದವರಿಗೆ ಆ ಊರಿಗೆ ಬಂದು ಭಾಷಣ ಮಾಡಲೂ ಬಿಡುತ್ತಿರಲಿಲ್ಲ. ಈಗಿನ ಮತದಾರರಿಗೆ ಆ ಮುಕ್ತತೆ ಉಳಿದಿಲ್ಲ. ಅವರು ಇಂತಹುದೇ ಪಕ್ಷ ಬೆಂಬಲಿಸುವುದಾಗಿ ಹೇಳಲು ಹಿಂದೇಟು ಹಾಕುತ್ತಾರೆ. ಸೇರಿನ ರಾಜಕಾರಣ ಹೆಚ್ಚಾಗಿದೆ. ಊರಿನ ಅಭಿವೃದ್ಧಿ ಮತದಾರನಿಗೆ ಅಗತ್ಯ. ಪಕ್ಷಾಧಾರಿತವಾಗಿ ಗುರುತಿಸಿಕೊಂಡರೆ, ಊರು ಅಭಿವೃದ್ಧಿಯಾಗದು. ಹೀಗಾಗಿ, ಎಲ್ಲರೊಡನೆ ಗುರುತಿಸಿಕೊಳ್ಳುತ್ತಾರೆ’ ಎಂದು ಇಂದಿನ ಮತದಾರರ ಇಕ್ಕಟ್ಟಿನ ಸ್ಥಿತಿಯನ್ನು ತೆರೆದಿಟ್ಟರು.