ದೇವಾಲಯದ ಅರ್ಚಕ ಕೃಷ್ಣ ಭಟ್ ಹಾಗೂ ವಲಯದ ಮಾತೃ ವಿಭಾಗ ಪ್ರಧಾನರಾದ ಮಮತಾ ಹೆಗಡೆ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಂತ್ರ ಪಠಣ, ಭಜನೆ ರಾಮಾಯಣ, ಆದಿತ್ಯ ಹೃದಯ ಮುಂತಾದ ಸ್ತೋತ್ರಗಳ ಪಠಣ ಹಾಗೂ ಭಜನೆ ಕಾರ್ಯಕ್ರಮಗಳನ್ನೂ ನೆರವೇರಿಸಲಾಯಿತು. ವಲಯದ ಗುರಿಕಾರರು ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.