ಕಾರ್ಮಿಕ ಇಲಾಖೆ ಮೂಲಕ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೀಡುವ ಪಿಂಚಣಿ, ಮನೆ ಕಟ್ಟಲು ಸಹಾಯಧನ, ಹೆರಿಗೆಯಾದ ಮಹಿಳೆಗೆ ಲಕ್ಷ್ಮಿ ಬಾಂಡ್, ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ದೊರೆಯುತ್ತದೆ. ಕಟ್ಟಡ ನಿರ್ಮಾಣದ ವೇಳೆ ಮೃತಪಟ್ಟರೆ, ಅಂಗವಿಕಲರಾದರೆ ಅದಕ್ಕೆ ಸಹ ಸರ್ಕಾರ ನೆರವು ನೀಡುತ್ತದೆ. ಆದರೆ, ತಾಲ್ಲೂಕಿನ ಕಾರ್ಮಿಕರು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.