‘ಈ ಭಾಗದಲ್ಲಿ ಕೆಲವೇ ಮನೆಗಳು ಇವೆ. ಆದರೆ, ಈ ಮಾರ್ಗವು ವಾಟೆಬೆಟ್ಟ, ಹೂತನಮನೆ, ಹೆಗ್ಗಾರಳ್ಳಿ ಮೊದಲಾದ ಊರುಗಳಿಗೆ ಸಂಪರ್ಕದ ಕೊಂಡಿಯಾಗಿದೆ. ಇಲ್ಲಿ ಸೇತುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಮಕ್ಕಳು, ವೃದ್ಧರು ಕಾಲುಸಂಕದ ಮೇಲೆ ಹೆದರುತ್ತಲೇ ಹೆಜ್ಜೆ ಹಾಕುತ್ತಾರೆ. ಸಂಕದ ಕೆಳಗೆ ಉಕ್ಕಿ ಹರಿಯುವ ಹೊಳೆಯನ್ನು ಕಂಡರೆ ಎದೆ ಝಲ್ಲೆನ್ನುತ್ತದೆ’ ಎನ್ನುತ್ತಾರೆ ಸ್ಥಳೀಯ ನಾರಾಯಣ ಹೆಗಡೆ.