‘ಬೆಳಿಗ್ಗೆ 8.30ರಿಂದ ರಾತ್ರಿ 8.30ರವರೆಗೆ ನಿರಂತರವಾಗಿ ಕೆಲಸ ಮಾಡುತ್ತೇವೆ. ಜಾತ್ರೆ ಮುಗಿಯುವ ತನಕವೂ ಇದು ಮುಂದುವರಿಯುತ್ತದೆ. ನಾಲ್ಕು ಬಂಡಿಗಳಿಂದ ದಿನವೊಂದಕ್ಕೆ 2 ಕ್ವಿಂಟಲ್ ಕಾಳು ಸಿದ್ಧವಾಗುತ್ತಿದೆ. ಈಗಾಗಲೇ 30 ಕ್ವಿಂಟಲ್ ಕಡಲೆಹಿಟ್ಟು, 100 ಕ್ವಿಂಟಲ್ ಸಕ್ಕರೆ, 165 ಡಬ್ಬಿ ಎಣ್ಣೆಗಳು ಬಂದಿವೆ. ಈ ಸಂಗ್ರಹ ಖಾಲಿಯಾದ ಮೇಲೆ ಮತ್ತೆ ಸಾಮಗ್ರಿಗಳು ಬರುತ್ತವೆ’ ಎಂದು ಕಾಳು ಕರಿಯುತ್ತಿದ್ದ ಮಂಜುನಾಥ ಹೆಗಡೆ, ನರಸಿಂಹ ಹೆಗಡೆ ಹೇಳಿದರು.