ತ್ಯಾಜ್ಯ ಸೇರಿಕೊಂಡಿದ್ದರಿಂದ ಪಾಚಿಗಳೂ ಸುಟ್ಟಿದ್ದು,ಇಲ್ಲಿನ ಸೀತಾ ನಗರ ಸಮೀಪದ ಚರಂಡಿಯಲ್ಲಿ ನೀರಿನ ಬಣ್ಣ ಬದಲಾಗಿತ್ತು. ಈ ರೀತಿಯ ತ್ಯಾಜ್ಯ ಸೇರಿಕೊಂಡ ಕಾರಣ ಸಮೀಪದ ಮನೆಗಳಲ್ಲಿ ಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಈ ರೀತಿ ಪದೇಪದೇ ನಡೆಯುತ್ತಿರುವ ಬಗ್ಗೆ ಗಮನಕ್ಕೆ ತಂದರೂ ಕಾರ್ಖಾನೆಯ ಆಡಳಿತ ಮಂಡಳಿ ಗಮನ ಹರಿಸುತ್ತಿಲ್ಲ. ಇದರಿಂದ ಇಲ್ಲಿನ ನಿವಾಸಿಗಳ ಆರೋಗ್ಯದ ಬಗ್ಗೆ ಚಿಂತೆಯಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆಯು ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.