ಸರ್ವೆ ನಂಬರ್ 50ರಲ್ಲಿರುವ ನೆಡುತೋಪಿನಲ್ಲಿ ಬರುತ್ತಿದ್ದಾಗ ಚಿರತೆಯು ಅವರ ಮೇಲೆ ಏಕಾಏಕಿ ಎರಗಿತು.ಈ ಬಗ್ಗೆ ಮಾಹಿತಿ ನೀಡಿದ ಅವರ ಸಂಬಂಧಿ ಗಣೇಶ ಹೆಗಡೆ,‘ವೆಂಕಟರಮಣ ಅವರ ಕುತ್ತಿಗೆಯನ್ನು ಗುರಿಯಾಗಿಟ್ಟು ಚಿರತೆ ದಾಳಿ ಮಾಡಿತ್ತು. ಅದನ್ನು ಗಮನಿಸಿದ ಅವರುಸಮಯಪ್ರಜ್ಞೆ ಮೆರೆದುತಮ್ಮ ಕೈಗಳನ್ನು ಅಡ್ಡವಾಗಿ ಹಿಡಿದರು. ಚಿರತೆಯು ಅವರ ಕೈಗಳಿಗೆ ಕಚ್ಚಿತು. ಗಾಯಗೊಂಡು ನೆಲಕ್ಕೆ ಬಿದ್ದ ಅವರು ಅಲ್ಲೇಕೈಗೆ ಸಿಕ್ಕ ಕಲ್ಲಿನಿಂದ ಚಿರತೆಯ ಮುಖಕ್ಕೆ ಹೊಡೆದರು. ಆಗ ಅದು ಓಡಿಹೋಗಿದ್ದರಿಂದ ಅವರ ಜೀವ ಉಳಿಯಿತು’ ಎಂದು ತಿಳಿಸಿದರು.