ಬಟ್ಟೆ ಅಂಗಡಿ, ಕಿರಾಣಿ, ಬೇಕರಿ, ಕ್ಷೌರದ ಅಂಗಡಿ ಸೇರಿದಂತೆ ಎಲ್ಲ ಮಳಿಗೆಗಳೂ ಸಂಪೂರ್ಣ ಬಾಗಿಲು ಮುಚ್ಚಿದ್ದವು. ಸಾರಿಗೆ ಬಸ್ ಸಂಚಾರ ಕೂಡ ಇರಲಿಲ್ಲ. ಆಟೊರಿಕ್ಷಾ, ಟ್ಯಾಕ್ಸಿ, ಖಾಸಗಿ ವಾಹನಗಳು ಕೂಡ ರಸ್ತೆಗಿಳಿಯಲಿಲ್ಲ. ಕೆಲವೇ ಕೆಲವು ಔಷಧ ಅಂಗಡಿಗಳು ಮಾತ್ರ ಬಾಗಿಲು ತೆರೆದಿದ್ದವು. ಬಸ್ ನಿಲ್ದಾಣ ವೃತ್ತ, ಶಿವಾಜಿ ಸರ್ಕಲ್, ರಾಘವೇಂದ್ರ ಮಠ ವೃತ್ತ, ಅಶ್ವಿನಿ ಸರ್ಕಲ್, ದೇವಿಕೆರೆ ಹೀಗೆ ಎಲ್ಲ ಪ್ರಮುಖ ವೃತ್ತಗಳು ಬಿಕೋ ಎನ್ನುತ್ತಿದ್ದವು. ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.