ದಿನಕರ ದೇಸಾಯಿ ಹೆಸರಿನಲ್ಲಿ ನೀಡುತ್ತಿರುವ 22ನೇ ಕಾವ್ಯ ಪುರಸ್ಕಾರ ಇದಾಗಿದೆ. ಈ ವರ್ಷ 2018 ಮತ್ತು 2019ನೇ ಸಾಲಿನ ಕವನ ಸಂಕಲನಗಳನ್ನು ಆಹ್ವಾನಿಸಲಾಗಿತ್ತು. ಸಾಹಿತಿಗಳಾದ ಜಯಂತ ಕಾಯ್ಕಿಣಿ, ಆರ್.ಎಸ್. ನಾಯಕ, ಭಾಗೀರಥಿ ಹೆಗಡೆ ಅವರನ್ನೊಳಗೊಂಡ ತೀರ್ಪುಗಾರರ ತಂಡವು ಈ ಕೃತಿಯನ್ನು ಆಯ್ಕೆ ಮಾಡಿದೆ ಎಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.