ಚವಡಳ್ಳಿ ಹಾಗೂ ಕ್ಯಾಸನಕೇರಿ ಗ್ರಾಮಗಳಲ್ಲಿ ಹಿರಿಯ ಗೊರವಪ್ಪಜ್ಜರ ನೇತೃತ್ವದಲ್ಲಿ ಬೆಳಿಗ್ಗೆ ಕಾರಣಿಕ ನುಡಿಯಲಾಯಿತು. ಗ್ರಾಮದ ಮಧ್ಯಭಾಗದಲ್ಲಿ ನೂರಾರು ಭಕ್ತರು ಸುಡುಬಿಸಿಲನ್ನು ಲೆಕ್ಕಿಸದೇ, ಈ ವರ್ಷದ ಕಾರಣಿಕ ಕೇಳಲು ಸೇರಿದ್ದರು. ಹತ್ತಾರು ಅಡಿ ಎತ್ತರದ ಕಂಬ ಏರಿದ ಗೊರವಪ್ಪಜ್ಜ, ‘ಮುತ್ತು ಮೂರು ಪಾಲಾಯಿತಲೇ ಪರಾಕ್’... ಎಂದು ಕಾರಣಿಕ ನುಡಿದು, ಕೆಳಗೆ ಜಿಗಿದರು. ಭಕ್ತರು ಕಾರಣಿಕವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸುತ್ತ, ಆಲದಮರದ ಕೆಳಗಡೆಯ ಮೈಲಾರಲಿಂಗ ಗದ್ದುಗೆಯತ್ತ ಹೆಜ್ಜೆ ಹಾಕಿದರು.